ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಗಿಸು ಮತ್ತು ಹಿಂಗಾರು ಹಂಗಾಮುಗಳಿಗಾಗಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ (Weather Based Crop Insurance Scheme – WBCIS) ಸರ್ಕಾರದ ವತಿಯಿಂದ ಜಾರಿಗೆ ಬಂದಿದೆ.
ಈ ಯೋಜನೆಯಡಿ ಹವಾಮಾನ ವೈಪರೀತ್ಯದಿಂದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ನಷ್ಟವಾದಲ್ಲಿ ರೈತರಿಗೆ ಪರಿಹಾರ ನೀಡಲಾಗುತ್ತದೆ.
ಯೋಜನೆಯ ಪ್ರಮುಖ ಅಂಶಗಳು:
🔹 ಅಧಿಸೂಚಿತ ಬೆಳೆಗಳು:
- ಅಡಿಕೆ
- ಕಾಳುಮೆಣಸು
🔹 ಯಾರು ನೋಂದಾಯಿಸಬಹುದು?
- ಬೆಳೆಸಾಲ ಪಡೆದ ರೈತರು – ತಮ್ಮ ಸಾಲ ಪಡೆದ ಬ್ಯಾಂಕ್ನಲ್ಲಿ
- ಬೆಳೆಸಾಲವಿಲ್ಲದ ರೈತರು – ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ
- ಅಥವಾ ಸಾಮಾನ್ಯ ಸೇವಾ ಕೇಂದ್ರ (CSC) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ
🔹 ಪ್ರೀಮಿಯಂ ಮೊತ್ತ (ಪ್ರತಿ ಹೆಕ್ಟೇರ್ಗೆ):
- ಅಡಿಕೆ: ₹6400/-
- ಕಾಳುಮೆಣಸು: ₹2350/-
🔹 ನೋಂದಣಿಗೆ ಕೊನೆಯ ದಿನಾಂಕ:
📅 31 ಜುಲೈ 2025
🔹 ವಿಮಾ ಸಂಸ್ಥೆ (2025-26):
🏢 TATA AIG ಜನರಲ್ ಇನ್ಸೂರೆನ್ಸ್ ಕಂಪನಿ
ಕೋರಿಕೆ: ರೈತರು ಈ ಯೋಜನೆಯ ಸದುಪಯೋಗ ಪಡೆದು, ತಮ್ಮ ಬೆಳೆಗಳನ್ನು ಸುರಕ್ಷಿತಗೊಳಿಸಲು ತುರ್ತಾಗಿ ನೋಂದಾಯಿಸಿಕೊಳ್ಳಿ.
ಸಂಪರ್ಕಕ್ಕಾಗಿ: ನಿಮ್ಮ ಹತ್ತಿರದ ಬ್ಯಾಂಕ್, CSC ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರವನ್ನು ಸಂಪರ್ಕಿಸಿ.